Free House public schemes: Bumper News: ₹3.50 lakh subsidy to build your own house! Apply today for Ambedkar Niwas Yojana 2026

Telegram Group Join Now
WhatsApp Follow Join Now

ಸ್ವಂತ ಮನೆ ಕಟ್ಟಲು ₹3.50 ಲಕ್ಷ ಸಹಾಯಧನ! ಅಂಬೇಡ್ಕರ್ ನಿವಾಸ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

Free House public schemes: Bumper News: ₹3.50 lakh subsidy to build your own house! Apply today for Ambedkar Niwas Yojana 2026
Free House public schemes: Bumper News: ₹3.50 lakh subsidy to build your own house! Apply today for Ambedkar Niwas Yojana 2026

ಬೆಂಗಳೂರು: ಪ್ರತಿಯೊಬ್ಬ ಬಡವನಿಗೂ ತನ್ನದೇ ಆದ ಒಂದು ಸುಂದರ ಮನೆ ಕಟ್ಟಿಸಬೇಕು ಎಂಬ ದೊಡ್ಡ ಕನಸಿರುತ್ತದೆ. ಆ ಕನಸನ್ನು ನನಸು ಮಾಡಲು ಕರ್ನಾಟಕ ಸರ್ಕಾರವು ‘ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ’ (Ambedkar Niwas Yojana) ಯನ್ನು ಜಾರಿಗೆ ತಂದಿದೆ.

ನಿಮ್ಮ ಬಳಿ ಸ್ವಂತ ನಿವೇಶನವಿದ್ದು (Site), ಮನೆ ಕಟ್ಟಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಈ ಯೋಜನೆಯ ಮೂಲಕ ಸರ್ಕಾರವೇ ನಿಮಗೆ ಹಣಕಾಸಿನ ನೆರವು ನೀಡಲಿದೆ.

ಮುಖ್ಯಾಂಶಗಳು

  1. ಯೋಜನೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ
  2. ಗ್ರಾಮೀಣ ಪ್ರದೇಶದವರಿಗೆ:-1.75 ಲಕ್ಷದವರೆಗೆ
  3. ನಗರ ಪ್ರದೇಶದ ವರಿಗೆ 2 ಲಕ್ಷದಿಂದ 3,55,000 ವರೆಗೆ
  4. ಅರ್ಹತೆ: ಎಸ್ ಸಿ ಎಸ್ ಟಿ ಸಮುದಾಯದ ಬಡ ಕುಟುಂಬಗಳಿಗೆ ಕೊಡಲಾಗುವುದು
  5. ವೆಬ್ ಸೈಟ್: ashraya.karnataka.gov.in

ಸಬ್ಸಿಡಿ ಎಷ್ಟು ಸಿಗುತ್ತದೆ ಸಹಾಯಧನ ಎಷ್ಟು ಸಿಗಬಹುದು ನಿಮಗೆ,(subsidy details)

Free House public schemes: Bumper News: ₹3.50 lakh subsidy to build your own house! Apply today for Ambedkar Niwas Yojana 2026
  1. ಸರ್ಕಾರವು ಫಲಾನುಭವಿಗಳಿಗೆ ಅವರ ಖಾತೆಗೆ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತದೆ
  2. ಗ್ರಾಮೀಣ ಪ್ರದೇಶದವರೆಗೆ: ಹಳ್ಳಿಗಳಲ್ಲಿ ವಾಸವಿರುವವರಿಗೆ 1.75000 (ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಗಳು ಸಿಗಲಿದೆ)
  3. ನಗರ ಪ್ರದೇಶದವರಿಗೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಸುತ್ತಿರುವರಿಗೆ ಎರಡು ಲಕ್ಷ ರೂಗಳು ಸಹಾಯಧನವಾಗಿ ಸಿಗುತ್ತದೆ
  4. ವಿಶೇಷ ಸೂಚನೆ: ನಗರ ಪ್ರದೇಶದವರು ಇದನ್ನು ಕೇಂದ್ರದ `ಪ್ರಧಾನಮಂತ್ರಿ ಅವಾಸ್ ಯೋಜನೆ’ ಜೊತೆ ಸಂಯೋಜಿಸಿದರೆ ಹೆಚ್ಚುವರಿ 150000/- ಸೇರಿ ಒಟ್ಟು 350,000,ವರೆಗೆ ಲಾಭ ಪಡೆಯಬಹುದಾಗಿದೆ
ವಿವರ (Details)ಮಾಹಿತಿ (Info)
ಗ್ರಾಮೀಣ ಸಹಾಯಧನ₹1,75,000
ನಗರ ಸಹಾಯಧನ₹2,00,000 (Max ₹3.5L with PM Awas)
ಮೀಸಲಾತಿSC: 70% | ST: 30%

ಯಾರೆಲ್ಲಾ ಈ ಅಪ್ಲಿಕೇಶನ್ ಹಾಕಬಹುದು(eligibility criteria)

ಈ ಯೋಜನೆಯ ಲಾಭ ಪಡೆಯಲು ಈ ಕೆಳಗಿನ ಅರ್ಹತೆಗಳು ಕಡ್ಡಾಯ:

ಅರ್ಜಿದಾರರು ಕಡ್ಡಾಯವಾಗಿ ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಕ್ಕೆ (ST) ಸೇರಿದವರಾಗಿರಬೇಕು.

ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.

ಆದಾಯ ಮಿತಿ: ಗ್ರಾಮೀಣ ಪ್ರದೇಶದವರಿಗೆ ವಾರ್ಷಿಕ ಆದಾಯ ₹32,000 ಮತ್ತು ನಗರ ಪ್ರದೇಶದವರಿಗೆ ₹87,600 ಮೀರಬಾರದು.

ಅರ್ಜಿದಾರರ ಹೆಸರಿನಲ್ಲಿ ಸ್ವಂತ ನಿವೇಶನ (Site) ಅಥವಾ ಸರ್ಕಾರ ನೀಡಿರುವ ಹಕ್ಕುಪತ್ರ ಇರಬೇಕು.

ಈ ಹಿಂದೆ ಸರ್ಕಾರದ ಯಾವುದೇ ವಸತಿ ಯೋಜನೆಯ ಲಾಭ ಪಡೆದಿರಬಾರದು.

ಅಗತ್ಯವಿರುವ ದಾಖಲೆಗಳು

  1. ಆಧಾರ್ ಕಾರ್ಡ್
  2. ಬಿಪಿಎಲ್ (BPL) ರೇಷನ್ ಕಾರ್ಡ್
  3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  4. ಸೈಟ್ ಹಕ್ಕು ಪತ್ರ ಅಥವಾ ಖಾತಾ ಪತ್ರ
  5. ಬ್ಯಾಂಕ್ ಪಾಸ್‌ಬುಕ್ ಪ್ರತಿ

ಅರ್ಜಿ ಸಲ್ಲಿಸುವುದು ಹೇಗೆ?


ನೀವು online ಮೂಲಕ ashraya.karnataka.gov.in ಈ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ , ಅಥವಾ ನಿಮ್ಮ ಗ್ರಾಮ ಪಂಚಾಯಿತಿ ಪುರಸಭೆ ಮತ್ತು ನಗರಸಭೆ ಕಚೇರಿಗೆ ಹೋಗಿ ಅರ್ಜಿ ಫಾರಂ ಪಡೆದು ಭರ್ತಿ ಮಾಡಬಹುದು ಫಲಾನುಭವಿಗಳು ಗ್ರಾಮ ಪಂಚಾಯಿತಿ ಸಭೆಯಲ್ಲಿ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ

ಈ ಯೋಜನೆ ಅಡಿಯಲ್ಲಿ ಹಣವನ್ನು ಹಂತ ಹಂತವಾಗಿ ನೀಡಲಾಗುತ್ತದೆ, ಪಾಯ ಕಟ್ಟಿದ ಮೇಲೆ ಗೋಡೆ ಛಾವಣಿ ಹಂತಕ್ಕೆ ತಕ್ಕಂತೆ ನಾಲ್ಕು ಕಂತುಗಳಲ್ಲಿ ಹಣ ಜಮಾ ಮಾಡಲಾಗುತ್ತದೆ ನಿಮ್ಮ ಖಾತೆಗೆ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ? Step-By-Step

ಅಂಬೇಡ್ಕರ್ ನಿವಾಸ ಯೋಜನೆ: ಆನ್‌ಲೈನ್ ಅರ್ಜಿ ಸಲ್ಲಿಸುವ 5 ಸರಳ ಹಂತಗಳು

  • ಹಂತ 1 (ಭೇಟಿ ನೀಡಿ): ashraya.karnataka.gov.in ವೆಬ್‌ಸೈಟ್‌ಗೆ ಹೋಗಿ “Online Application” ಮೇಲೆ ಕ್ಲಿಕ್ ಮಾಡಿ.
  • ಹಂತ 2 (ನೋಂದಣಿ): ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, OTP ಮೂಲಕ ಲಾಗಿನ್ ಆಗಿ.
  • ಹಂತ 3 (ವಿವರ ಭರ್ತಿ): ನಿಮ್ಮ ಹೆಸರು, ಆಧಾರ್ ಸಂಖ್ಯೆ ಮತ್ತು ಜಾತಿ/ಆದಾಯ ಪ್ರಮಾಣ ಪತ್ರದ RD ಸಂಖ್ಯೆಯನ್ನು ನಮೂದಿಸಿ.
  • ಹಂತ 4 (ದಾಖಲೆ ಅಪ್‌ಲೋಡ್): ನಿಮ್ಮ ನಿವೇಶನದ (Site) ಹಕ್ಕುಪತ್ರ, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ಅಪ್‌ಲೋಡ್ ಮಾಡಿ.
  • ಹಂತ 5 (ಸಲ್ಲಿಕೆ): ಎಲ್ಲವನ್ನೂ ಪರಿಶೀಲಿಸಿ ‘Submit’ ಬಟನ್ ಒತ್ತಿ, ಅರ್ಜಿ ಸಂಖ್ಯೆಯನ್ನು (Acknowledgement Number) ಸೇವ್ ಮಾಡಿಕೊಳ್ಳಿ.

ತ್ವರಿತ ಸಲಹೆ: ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಕಾರ್ಡ್‌ಗೆ ಫೋನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.


ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
  1. ಅಂಬೇಡ್ಕರ್ ನಿವಾಸ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಈ ಯೋಜನೆಯು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಕುಟುಂಬಗಳಿಗೆ ಮಾತ್ರ ಮೀಸಲಾಗಿದೆ. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಮತ್ತು ಸ್ವಂತ ಸೂರು ಹೊಂದಿರಬಾರದು.

  1. ಈ ಯೋಜನೆಯಡಿ ಮನೆ ಕಟ್ಟಲು ಎಷ್ಟು ಹಣ ಸಿಗುತ್ತದೆ?

ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ₹1.75 ಲಕ್ಷ ಮತ್ತು ನಗರ ಪ್ರದೇಶದ ಫಲಾನುಭವಿಗಳಿಗೆ ₹2.00 ಲಕ್ಷ ಸಹಾಯಧನ ಸಿಗುತ್ತದೆ. ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜೊತೆಗೂಡಿಸಿದರೆ ಇನ್ನೂ ಹೆಚ್ಚಿನ ಹಣ ಸಿಗುವ ಸಾಧ್ಯತೆ ಇರುತ್ತದೆ.

  1. ಅರ್ಜಿ ಸಲ್ಲಿಸಲು ವಾರ್ಷಿಕ ಆದಾಯ ಮಿತಿ ಎಷ್ಟಿರಬೇಕು? ಗ್

ರಾಮೀಣ ಪ್ರದೇಶದ ಅರ್ಜಿದಾರರ ವಾರ್ಷಿಕ ಆದಾಯ ₹32,000 ಕ್ಕಿಂತ ಕಡಿಮೆ ಇರಬೇಕು. ನಗರ ಪ್ರದೇಶದವರಾದರೆ ವಾರ್ಷಿಕ ಆದಾಯ ₹87,600 ಕ್ಕಿಂತ ಕಡಿಮೆ ಇರಬೇಕು.

  1. ನನ್ನ ಬಳಿ ಸ್ವಂತ ಸೈಟ್ ಇಲ್ಲ, ನಾನು ಅರ್ಜಿ ಹಾಕಬಹುದೇ?

ಇಲ್ಲ, ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹೆಸರಿನಲ್ಲಿ ಸ್ವಂತ ನಿವೇಶನ (Site) ಅಥವಾ ಸರ್ಕಾರ ನೀಡಿದ ಹಕ್ಕುಪತ್ರ (Hakku Patra) ಕಡ್ಡಾಯವಾಗಿ ಇರಬೇಕು. ನಿವೇಶನ ಇಲ್ಲದವರಿಗೆ ಸರ್ಕಾರವೇ ನಿವೇಶನ ನೀಡುವ ಬೇರೆ ಯೋಜನೆಗಳಿವೆ.

  1. ಅರ್ಜಿ ಎಲ್ಲಿ ಸಲ್ಲಿಸಬೇಕು?

ನೀವು ರಾಜೀವ್ ಗಾಂಧಿ ವಸತಿ ನಿಗಮದ ವೆಬ್‌ಸೈಟ್ (ashraya.karnataka.gov.in) ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಗ್ರಾಮ ಪಂಚಾಯಿತಿ, ಪುರಸಭೆ ಅಥವಾ ನಗರಸಭೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

What’s appClick here
Telegram Click here
More information Click here

About The Author