UPS for central government employees from today
ಕೇಂದ್ರ ಸರಕಾರಿ ನೌಕರರಿಗಾಗಿ ರೂಪಿಸಲಾಗಿರುವ ಏಕೀಕೃತ ಪಿಂಚಣಿ ವ್ಯವಸ್ಥೆ(ಯುಪಿಎಸ್) ಮಂಗಳವಾರ (ಏ.1)ದಿಂದ ಜಾರಿಗೆ ಬರುತ್ತಿದೆ. ಯೋಜನೆ ಅನ್ವಯ ನೌಕರರಿಗೆ ಮಾಸಿಕ ಪಿಂಚಣಿ ಸೇರಿ ಹಲವು ಸೌಕರ್ಯಗಳು ದೊರೆಯಲಿವೆ. ಯುಪಿಎಸ್ ಯೋಜನೆಗೆ ಯಾರು ಅರ್ಹರು? ಯಾವೆಲ್ಲ ಸೌಲಭ್ಯಗಳು ಸಿಗಲಿವೆ? ನಿಯಮಗಳು ಏನೇನು?
ಯುಪಿಎಸ್ಗೆ ಯಾರು ಅರ್ಹರು?
- ಈಗಾಗಲೇ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ವ್ಯಾಪ್ತಿಗೆ ಬರುವವರಿಗೆ ಯುಪಿಎಸ್ ಅನ್ವಯ
- 25 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದವರಿಗೆ ನಿವೃತ್ತಿ ಬಳಿಕ ಮೂಲ ವೇತನದ ಶೇ.50ರಷ್ಟು ಮೊತ್ತವನ್ನು ಪಿಂಚಣಿ ನೀಡಲಾಗುತ್ತದೆ
- 10 ವರ್ಷ ಸೇವೆ ಸಲ್ಲಿಸಿದವರಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ಸಿಗಲಿದೆ
- 10 ವರ್ಷಗಳಿಗಿಂತ ಮೊದಲು ರಾಜೀನಾಮೆ ನೀಡಿದವರು, ಕೆಲಸದಿಂದ ವಜಾಗೊಂಡವರಿಗೆ ಪಿಂಚಣಿ ಸಿಗಲ್ಲ
- 2025ರ ಮಾರ್ಚ್ 31 ಅಥವಾ ನಂತರ ಕೆಲಸಕ್ಕೆ ಸೇರಿದವರು 30 ದಿನಗಳೊಳಗೆ ಯುಪಿಎಸ್ ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯ
ಕೇಂದ್ರ ಸರಕಾರಿ ನೌಕರರಿಗೆ ಇಂದಿನಿಂದ ಯುಪಿಎಸ್
ಗ್ರಾಚುಟಿಯೂ ಇದೆ
ಸರಕಾರಿ ನೌಕರರಿಗೆ ಎರಡು ರೀತಿಯಲ್ಲಿ ಗ್ರಾಚುಟಿ
ನೀಡಲಾಗುತ್ತದೆ. ಮೊದಲನೆಯದಾಗಿ, ಕನಿಷ್ಠ ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದುವ ನೌಕರರಿಗೆ ರಿಟೈರ್ ಮೆಂಟ್ ಗ್ರಾಚುಟಿ ನೀಡಲಾಗುತ್ತದೆ. ಸೇವಾ ನಿವೃತ್ತಿಯ ನಂತರವೂ ಗ್ರಾಚುಟಿ ಸಿಗುತ್ತದೆ. ಇದರ ಮೊತ್ತ 25 ಲಕ್ಷ ರೂ. ದಾಟಬಾರದು ಎಂಬ ನಿಯಮವಿದೆ. ಇನ್ನು, ನೌಕರನು ಅಕಾಲಿಕವಾಗಿ ಮೃತಪಟ್ಟರೆ, ಆತ ಸಲ್ಲಿಸಿದ ಸೇವೆಯ ವರ್ಷಗಳ ಆಧಾರದ ಮೇಲೆ ಕುಟುಂಬಸ್ಥರಿಗೆ ಗ್ರಾಚುಟಿ ನೀಡಲಾಗುತ್ತದೆ. ಇದಕ್ಕೆ ಡೆತ್ ಗ್ರಾಚುಟಿ ಎಂದು ಕರೆಯಲಾಗುತ್ತದೆ.
23 ಲಕ್ಷ ಕೇಂದ್ರ ಸರಕಾರಿ ನೌಕರರಿಗೆ ಯುಪಿಎಸ್, ಯೋಜನೆಯಿಂದ ಅನುಕೂಲ
50ಲಕ್ಷ ಹಾಲಿ ಇರುವ ಕೇಂದ್ರ ಸರಕಾರಿ ನೌಕರರ ಸಂಖ್ಯೆ
ಯುಪಿಎಸ್ಗೆ ಜಮೆ ಆಗುವ ಮೊತ್ತ?
ನೌಕರರ ಮಾಸಿಕ ಮೂಲವೇತನ
ಹಾಗೂ ತುಟ್ಟಿಭತ್ಯೆಯ (ಡಿಎ) ಶೇ.10ರಷ್ಟು ಭಾಗವನ್ನು ಯುಪಿಎಸ್ ಯೋಜನೆಗೆ ನೀಡಬೇಕು. ಕೇಂದ್ರ ಸರಕಾರವು ಮೂಲವೇತನ ಮತ್ತು ತುಟ್ಟಿಭತ್ಯೆಯ ಶೇ.18ರಷ್ಟು ಭಾಗವನ್ನು ಯುಪಿಎಸ್ಗೆ ಕೊಡುಗೆ ನೀಡುತ್ತದೆ. ನಿವೃತ್ತಿಯ ಬಳಿಕ ಒಂದು ವರ್ಷದ ಮೂಲವೇತನದ ಸರಾಸರಿ ಶೇ.50ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
ಇಂದಿನಿಂದ ಯಾವೆಲ್ಲ ಹಣಕಾಸು ನಿಯಮ ಬದಲು?
ಮಂಗಳವಾರದಿಂದ ಆರಂಭವಾಗುವ 2025-26ರ ಹಣಕಾಸು ವರ್ಷದಿಂದ ಆರ್ಥಿಕ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಲಿವೆ.
- 12 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿ, ಉದ್ಯೋಗಿಗಳಿಗೆ ಒಟ್ಟು 12.75 ಲಕ್ಷ ರೂ.ವರೆಗೆ ತೆರಿಗೆ ಇಲ್ಲ
- ನಿಷ್ಕ್ರಿಯಗೊಂಡಿರುವ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆದ ಯುಪಿಐ ಐಡಿ ರದ್ದು
- ಎಸ್ಬಿಐ, ಪಿಎನ್ಬಿ, ಕೆನರಾ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಮೊತ್ತ ಇರದಿದ್ದರೆ ದಂಡ
- ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡದವರಿಗೆ ಹೂಡಿಕೆಯ ಡಿವಿಡೆಂಡ್ ಸಿಗುವುದಿಲ್ಲ
- ಮ್ಯೂಚುವಲ್ ಫಂಡ್, ಡಿಮ್ಯಾಟ್ ಖಾತೆದಾರರಿಗೆ ಕೆವೈಸಿ ಕಡ್ಡಾಯ
- ಹಿರಿಯ ನಾಗರಿಕರಿಗೆ ಬಡ್ಡಿಯಿಂದ ಲಭಿಸುವ 1 ಲಕ್ಷ ರೂ. ವರೆಗಿನ ಆದಾಯಕ್ಕೆ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಇಲ್ಲ. ಮೊದಲು 50 ಸಾವಿರ ರೂ. ಇತ್ತು.
- ವಿದೇಶ ಪ್ರವಾಸದ ವೇಳೆ 10 ಲಕ್ಷ ರೂ.ವರೆಗಿನ ಖರ್ಚಿಗೆ ಟಿಸಿಎಸ್ (ಮೂಲದಲ್ಲಿ ತೆರಿಗೆ ಸಂಗ್ರಹ) ಅನ್ವಯ ಆಗಲ್ಲ
ಕೃಪೆ: ವಿಜಯ ಕರ್ನಾಟಕ ಪತ್ರಿಕೆ